Anyayakari Brahma Song Lyrics In Kannada

Song: Dua
Movie: Sulaikha Manzil
Singer: Vishnu Vijay
Music: Vishnu Vijay
Lyrics: Mu.Ri & Vishnu Vijay
Label: Think Music

Anyayakari Brahma Lyrics In Kannada

ಅನ್ಯಾಯ ಕಾರಿ ಬ್ರಹ್ಮ ಸುಂದರನ ಸನ್ಯಾಸಿ ಮಡಬೊಹುದೇ
ಅನ್ಯಾಯ ಕಾರಿ ಬ್ರಹ್ಮ ಸುಂದರನ ಸನ್ಯಾಸಿ ಮಡಬೊಹುದೇ ll

ಬೀದಿಯೊಳಗೆ ಮಾರಾಯ ಬಾರಿ ಸೊಬಗನು ತೋರುತ್ತಾ
ಮಾರಾಯ ಬಾರಿ ಸೊಬಗನು ತೋರುತ್ತಾ ll
ವೇಶ್ಯಯರ ಬೀದಿಯೊಳಗೆ ಜೋಗಯ್ಯ ಅಂದ ಚಂದದಿ ಬಂದನೋ
ಜೋಗಯ್ಯ ಅಂದ ಚಂದದಿ ಬಂದನೋ ll

ಅಂದ ಸಿರಿ ಗಂಧಾದ್ ವನವೇ ಪರಿಮಳದ ಕೆಂದಾವರೆ ಗುಣದ ವನವೇ
ಪರಿಮಳದ ಕೆಂದಾವರೆ ಗುಣದ ಒಲವೇ ll
ಕೆಂದಾವರೆ ಗುಣದಂಥ ವೀರ ಅರ್ಜುನ ರಾಯ ನಿಂದೊಂದು ರಾಗ ನಲಿಯೋ
ನಿಂದೊಂದು ರಾಗ ನಲಿಯೋ ll

ಇಂದ್ರನ ಚಂದ್ರನಿನ್ವನು ಜೋಗಯ್ಯ ಚಂದಾ ಮುಕುಂದನಿವನು
ಜೋಗಯ್ಯ ಚಂದಾ ಮುಕುಂದನಿವನು ll
ಇಂಥ ಚಂದುಳ್ಳ ಅಂದುಳ್ಳ ಮರಿ ಜೋಗಿ ನಾವೆಲ್ಲೂ ನೋಡಲಿಲ್ಲ
ನಾವೆಲ್ಲೂ ನೋಡಲಿಲ್ಲ ll

ಹಾಡಿದರೆ ಅರಗಿಣಿಯೂ ಜೋಗಯ್ಯ ನಲಿದರೆ ನವಿಲು ಮರಿಯೂ
ಜೋಗಯ್ಯ ನಲಿದರೆ ನವಿಲು ಮರಿಯೂ ll
ಹಾಡಿದರೆ ಅರಗಿಣಿ ನಲಿದರೆ ನವಿಲು ಮರಿ ಕೂಗಿದರೆ ಕೋಗಿಲೆ ಮಾರಿಯೋ
ಕೂಗಿದರೆ ಕೋಗಿಲೆ ಮಾರಿಯೋ ll

ರಾಗವ ಚೆಂದ ನೋಡೇ ಜೋಗಯ್ಯನಾ ರೂಪುಗಳ ನೋಡಿರಮ್ಮ
ಜೋಗಯ್ಯನಾ ರೂಪುಗಳ ನೋಡಿರಮ್ಮ ll
ಎಸ್ಟೋತು ಕೇಳಿದರು ಮನಸಿಗೆ ಸಂತೋಷ ,ಮನಸಿಗೆ ಸಂತೋಷ ಉಂಟೂ
ಮನಸಿಗೆ ಸಂತೋಷ ಉಂಟೂ ll

ಹೆತ್ತಮ್ಮನ್ಯಾರೋ ಕಾಣೆ ಜೋಗಯ್ಯನ ಹಡೆದಮ್ಮನ್ಯಾರೋ ಕಾಣೆ
ಜೋಗಯ್ಯನ ಹಡೆದಮ್ಮನ್ಯಾರೋ ಕಾಣೆ ll
ಹೆತ್ತಂತ ತಯ್ಯಮ್ಮ ಇಂಥ.. ಸುಂದರನ ಬಿಟ್ಟ್ಯಾಗೇ ಇರುವಳಮ್ಮ
ಬಿಟ್ಟ್ಯಾಗೇ ಇರುವಳಮ್ಮll

ಅನ್ಯಾಯಿ ಕಾರಿ ಬ್ರಹ್ಮ ಇವನನ್ನ ಸನ್ಯಾಸಿ ಮಾಡಬಹುದೇ I ಜೋಗಯ್ಯನ
ಜೋಗಯ್ಯನ ಸನ್ಯಾಸಿ ಮಾಡಬಹುದೇ ll
ರಾಜನ ಹೊಟ್ಟೆಯಲ್ಲಿ ಹುಟ್ಟಿದರೆ ಜೋಗಯ್ಯನ ಕಣ್ಣೆತ್ತಿ ನೋಡಬಹುದೇ
ಕಣ್ಣೆತ್ತಿ ನೋಡಬಹುದೇ ll

ಅಂದ ಸಿರಿ ಗಂಧಾದ್ ವನವೇ ಪರಿಮಳದ ಕೆಂದಾವರೆ ಗುಣದ ಒಲವೇ
ಪರಿಮಳದ ಕೆಂದಾವರೆ ಗುಣದ ಒಲವೇ ll
ಕೆಂದಾವರೆ ಗುಣದಂಥ ವೀರ ಅರ್ಜುನ ರಾಯ ನಿಂದೊಂದು ರಾಗ ನಲಿಯೋ
ನಿಂದೊಂದು ರಾಗ ನಲಿಯೋ ll

ಅನ್ಯಾಯಿ ಕಾರಿ ಬ್ರಹ್ಮ ಸುಂದರನ ಸನ್ಯಾಸಿ ಮಾಡಬಹುದೇ
ಸುಂದರನ ಸನ್ಯಾಸಿ ಮಡಬೊಹುದೇ ll
ಹೆತ್ತಂತ ತಯ್ಯಮ್ಮ ಇಂಥ.. ಸುಂದರನ ಬಿಟ್ಟ್ಯಾಗೇ ಇರುವಳಮ್ಮ
ಬಿಟ್ಟ್ಯಾಗೇ ಇರುವಳಮ್ಮ ll

ಹಲ್ಲಿನ ಸಾಲು ನೋಡೇ ಜೋಗಯ್ಯಗೆ ದಾಳಿಂಬಿ ಬೀಜದಗೆ
ಜೋಗಯ್ಯಗೆ ದಾಳಿಂಬಿ ಬೀಜದಗೆ ll
ಕಣ್ಣುಗಳ ಹೊಳಪಾ ನೋಡಿದರೆ ಜೋಗಯ್ಯಗೆ ನಿಂಬಿಯ ಹೋಳಿನಂಗೆ
ಜೋಗಯ್ಯಗೆ ನಿಂಬಿಯ ಹೋಳಿನಂಗೆ ll

ತುಟಿಯ ಚೆಂದ ನೋಡಿ ಜೋಗಯ್ಯಗೆ ತೊಂಡೆಯ ಹಣ್ಣಿನಂಗೆ
ಜೋಗಯ್ಯಗೆ ತೊಂಡೆಯ ಹಣ್ಣಿನಂಗೆ ll
ಉಬ್ಬಿನ ಬಾವ ನೋಡಿದರೆ ಜೋಗಯ್ಯಗೆ ಉಬ್ಬಕ್ಕಿ ಗರಿಯಂಗೆ
ಉಬ್ಬಕ್ಕಿ ಗರಿಯಂಗೆ ll

ಕೆನ್ನೆಯ ಕಾನೂಪ ನೋಡೇ ಜೋಗಯ್ಯಗೆ ಕನ್ನಡಿಯ ಬಿಂಬದಾಗೆ
ಜೋಗಯ್ಯಗೆ ಕನ್ನಡಿಯ ಬಿಂಬದಾಗೆ ll
ತಲೆಯಾ ಬಾವಗಳ ನೋಡಿದರೆ ಜೋಗಯ್ಯನಿಗೆ ಚೌಲಿಯ ಮಿರಿಗಿನಂಗೆ
ಚೌಲಿಯ ಮಿರಿಗಿನಂಗೆ ll

ಅಂಗಾಲಿನ ಬಾವ ನೋಡೇ ಜೋಗಯ್ಯನಿಗೆ ಉಣ್ಣಿಮೆಯ ಚಂದ್ರನಂಗೆ
ಜೋಗಯ್ಯನಿಗೆ ಉಣ್ಣಿಮೆಯ ಚಂದ್ರನಂಗೆ ll
ಕಡೆಗಣ್ಣಿನ ನೋಟ ನೋಡಿದರೆ ಜೋಗಯ್ಯನಿಗೆ ಉಡಿ ಮಿಂಚು ಎಸೆದಂಗೆ
ಉಡಿ ಮಿಂಚು ಎಸೆದಂಗೆ ll

ಅಂದ ಸಿರಿ ಗಂಧಾದ್ ವನವೇ ಪರಿಮಳದ ಕೆಂದಾವರೆ ಗುಣದ ಒಲವೇ
ಪರಿಮಳದ ಕೆಂದಾವರೆ ಗುಣದ ಒಲವೇ ll
ಕೆಂದಾವರೆ ಗುಣದಂಥ ವೀರ ಅರ್ಜುನ ರಾಯ ನಿಂದೊಂದು ರಾಗ ನಲಿಯೋ
ನಿಂದೊಂದು ರಾಗ ನಲಿಯೋ ll

You may also like...